ಬೆಂಗಳೂರು: ಚುನಾವಣಾ ಆಯೋಗದ ಸೂಚನೆ ಮೇರೆಗೆ ಒಬ್ಬರು ಐ.ಎ.ಎಸ್ ಮತ್ತು ಆರು ಮಂದಿ ಐ.ಪಿ.ಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಐ.ಎ.ಎಸ್ ಅಧಿಕಾರಿ ವಿ.ಶಂಕರ್ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಐಪಿಎಸ್: ಲಾಭು ರಾಮ್ (ಡಿಸಿಪಿ, ಪೂರ್ವ ವಲಯ, ಬೆಂಗಳೂರು ನಗರ), ಶಂತನು ಸಿನ್ಹ (ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರ), ಅಭಿನವ್ ಖರೆ (ಎಸ್ಪಿ, ಚಿತ್ರದುರ್ಗ), ಬಿ.ರಮೇಶ್ (ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ, ಹುಬ್ಬಳ್ಳಿ ನಗರ), ಇ.ಮಾರ್ಟಿನ್ ಮಾರ್ಬಾನಿಯಾಂಗ್ (ಎಸ್ಪಿ, ರಾಮನಗರ), ರವಿ ಡಿ. ಚನ್ನಣ್ಣನವರ (ಎಸ್ಪಿ, ದಾವಣಗೆರೆ).