ಪ್ರತಿದಿನ ಬೆಳಿಗ್ಗೆ ಆ ಮನೆಗೆ ಹೂವು ಕೊಡುತ್ತಿದ್ದ ಮಹೇಶ್, ಅಂತೆಯೇ ಶನಿವಾರ ಬೆಳಗಿನ ಜಾವ 5 ಗಂಟೆಗೆ ಹೂವು ಕೊಡಲು ಜೋರಾಗಿ ಮನೆ ಬಾಗಿಲು ಬಡಿದಿದ್ದ.
ಇದರಿಂದ ಎಚ್ಚರಗೊಂಡ ಅನಿತಾ, ‘ಅಷ್ಟು ಜೋರಾಗಿ ಬಾಗಿಲು ಬಡಿಯುತ್ತಿಯಲ್ಲ. ನಿನಗೆ ಬುದ್ಧಿ ಇಲ್ವಾ. ಮನೆಯಲ್ಲಿ ಮಕ್ಕಳು ಮಲಗಿದ್ದಾರೆ. ಇನ್ನು ಮುಂದೆ ನೀನು ಮನೆ ಹತ್ತಿರ ಬರುವುದೇ ಬೇಡ’ ಎಂದು ಬೈದಿದ್ದರು.