ಬೆಂಗಳೂರು: ಯಮಲೂರು ಜಂಕ್ಷನ್ ಬಳಿಯ ಬೋರ್ವೆಲ್ ಬಸ್ ನಿಲ್ದಾಣ ಸಮೀಪದ ಫುಟ್ಪಾತ್ಗೆ ಗುದ್ದಿದ್ದರಿಂದ, ಬೈಕ್ ಸವಾರ ಶ್ರೀಕಾಂತ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಡುಗೋಡಿ ನಿವಾಸಿಯಾಗಿದ್ದ ಅವರು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತನ ಮನೆಗೆ ಶುಕ್ರವಾರ ಸಂಜೆ ಹೋಗಿದ್ದ ಅವರು, ಮನೆಗೆ ವಾಪಸ್ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.