`ಪೂರ್ಣಚಂದ್ರ ತೇಜಸ್ವಿ ಅವರು ಹೇಳಿದಂತೆ ಭಾಷೆಯು ಎಲ್ಲರಿಗೂ ಉಪಯುಕ್ತವಾಗಿರಬೇಕು. ಆಗ ಮಾತ್ರ ಭಾಷೆ ಕೊನೆಯವರೆಗೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಭಾಷೆಯನ್ನು ಎಲ್ಲರಿಗೂ ಉಪಯುಕ್ತವಾಗುವಂತೆ ಮಾಡುವ ಹೊಣೆ ಎಲ್ಲರ ಮೇಲಿದೆ' ಎಂದರು.
`ಯಾವುದೇ ಪ್ರತಿಷ್ಠಾನವು ಆ ವ್ಯಕ್ತಿಯ ಆದರ್ಶಗಳನ್ನು ಎತ್ತಿ ಹಿಡಿದು ಸಾಗಬೇಕು. ಬರಗೂರು ಅವರು ತಾವು ನಂಬಿದ ಸಿದ್ಧಾಂತಗಳಿಗೆ ಬದ್ಧರಾದವರು. ಅವರು ಎಂದಿಗೂ ನಿರಾಶೆಯಾದವರಲ್ಲ ಆಶಾವಾದವನ್ನೇ ಪ್ರತಿಪಾದಿಸುತ್ತ ಬಂದವರಾಗಿದ್ದಾರೆ. ಅವರ ಹೆಸರಿನ ಈ ಪ್ರತಿಷ್ಠಾನ ಸಮಯೋಚಿತವಾಗಿದೆ' ಎಂದರು.
ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, `ಸಾಹಿತ್ಯ ಮತ್ತು ಸಿನಿಮಾ ಎರಡೂ ತಳುಕು ಹಾಕಿಕೊಂಡಿವೆ. ಕನ್ನಡ ಚಿತ್ರಗಳಿಗೆ ಮಾನ್ಯತೆಯಿಲ್ಲ, ಕನ್ನಡ ಚಿತ್ರಗಳನ್ನು ಗುರುತಿಸುವುದಿಲ್ಲವೆಂಬುದು ಬಹುತೇಕರ ಆಕ್ಷೇಪಣೆಯಾಗಿದೆ. ಆದರೆ, ನಮ್ಮವರನ್ನು ನಾವೇ ಗುರುತಿಸುವುದಿಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು ಸಾಮಾನ್ಯವಾಗಿದೆ. ಇದರಿಂದ ನಮ್ಮ ಕನ್ನಡ ಚಿತ್ರಗಳು ಯಶಸ್ವಿಯಾವುದಿಲ್ಲ' ಎಂದು ಹೇಳಿದರು.
`ಹಿಂದಿನ ಸಿನಿಮಾಗಳಾದ ಸಂಸ್ಕಾರ, ಘಟಶ್ರಾದ್ಧ, ಹಂಸಗೀತೆ ಉತ್ತಮ ಚಿತ್ರಗಳು. ಬಂಡಾಯ ಧೋರಣೆಯ ಪ್ರತೀಕವಾಗಿ ಅನೇಕ ಸಿನಿಮಾಗಳು ಬಂದಿವೆ. ಒಳ್ಳೆಯ ಚಿತ್ರಗಳನ್ನು ನೋಡುವುದನ್ನು ನಮ್ಮ ಕನ್ನಡಿಗರಿಗೆ ತಿಳಿಸಬೇಕಾಗಿದೆ' ಎಂದು ಕನ್ನಡ ಚಿತ್ರರಂಗದ ಬಗ್ಗೆ ಬೆಳಕು ಚೆಲ್ಲಿದರು.
ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, `ನನ್ನ ಹೆಸರಿನಲ್ಲಿ ಪ್ರತಿಷ್ಠಾನದ ರಚನೆಯ ಅಗತ್ಯವಿರಲಿಲ್ಲ. ಆದರೆ, ಪ್ರೀತಿಯ ಸ್ನೇಹಿತರು ಮಾಡಿರುವುದರಿಂದ ಇದಕ್ಕೆ ಸಮ್ಮತಿಸಲೇ ಬೇಕಾಯಿತು. ಕನ್ನಡ ಮಕ್ಕಳಿಗೆ, ಬಡ ಮಕ್ಕಳಿಗೆ, ಮಣ್ಣಿನ ಮಕ್ಕಳಿಗೆ ಸಹಾಯ ಮಾಡಲು ಪ್ರತಿಷ್ಠಾನವು ದುಡಿಯಬೇಕು' ಎಂದು ಆಶಯವನ್ನು ವ್ಯಕ್ತಪಡಿಸಿದರು.