ಕಾರ್ಪೊರೇಷನ್ ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ವಾಹನಗಳು ಸಂಚರಿಸದಂತೆ ಸಿಮೆಂಟ್ ಇಟ್ಟಿಗೆಗಳನ್ನು ಅಡ್ಡ ಇಡಲಾಗಿತ್ತು. ಅದನ್ನು ಲೆಕ್ಕಿಸದ ಸವಾರರು ಇಟ್ಟಿಗೆಗಳ ಮೇಲೆ ಬೈಕ್ ಹತ್ತಿಸಿಕೊಂಡು ಹೋಗುತ್ತಿದ್ದರು. ಇದರಿಂದ ಪಾದಚಾರಿಗಳಿಗೆ ಓಡಾಟಕ್ಕೆ ತೊಂದರೆಯಾಗಿತ್ತು. ಅದನ್ನು ಗಮನಿಸಿದ ಮಂಜು ಥಾಮಸ್ ಎಂಬ ಯುವತಿ ಬೈಕ್ನ ಸವಾರರನ್ನು ಅಡ್ಡಗಟ್ಟಿ ವಿರೋಧ ವ್ಯಕ್ತಪಡಿಸಿದರು. ಸವಾರರೂ ಯುವತಿ ಜತೆ ವಾಗ್ವಾದಕ್ಕೆ ಇಳಿದಿದ್ದರು. ಆಗ ಸಾರ್ವಜನಿಕರು ಯುವತಿಗೆ ಬೆಂಬಲ ವ್ಯಕ್ತಪಡಿಸಿದ್ದರು.