ಬೆಂಗಳೂರು: ‘ರೋಟರಿ ಜಿಲ್ಲೆ 3190’ ಸಂಸ್ಥೆ ವತಿಯಿಂದ ನಗರದ ಪುರಭವನದಲ್ಲಿ ಭಾನುವಾರ ‘ಸಾಧನೆ ಸಂಭ್ರಮ’ ಕಾರ್ಯಕ್ರಮ ಜರುಗಿತು.
ತನ್ನ ಸೇವಾ ಕಾರ್ಯಗಳಿಂದ ವಿಶ್ವದ ಮೊದಲ ರೋಟರಿ ಜಿಲ್ಲಾ ಸಂಸ್ಥೆ ಎಂಬ ಕೀರ್ತಿಗೆ ‘ರೋಟರಿ ಜಿಲ್ಲೆ 3190’ ಭಾಜನವಾಗಿದೆ. 2015–16ನೇ ಸಾಲಿನಲ್ಲಿ ಕೆ.ಪಿ.ನಾಗೇಶ್ ನೇತೃತ್ವದಲ್ಲಿ ಕೈಗೊಂಡ ಕಾರ್ಯಕ್ರಮಗಳಿಂದ ಈ ಸ್ಥಾನ ಸಿಕ್ಕಿದೆ. ಹೀಗಾಗಿ ನಾಗೇಶ್ ಅವರನ್ನು ಅಭಿನಂದಿಸಲಾಯಿತು.
ಕೆ.ಗೋಪಾಲ ರೆಡ್ಡಿ, ಜಿ.ಆರ್.ಮಹೇಶ್, ನಿತಿಶ್ ಷಾ, ಪೀಯೂಷ್ ಜೈನ್, ಸತೀಶ್ ಮಾನಂದಿ, ಬಿ.ಆರ್.ಶೀತಲ್ ಕುಮಾರ್, ಅಂಬಿಕಾ ನಾರಾಯಣ್ ಸೇರಿದಂತೆ 22 ರೋಟರಿ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ನಾಗೇಶ್ ಪತ್ನಿ ಉಮಾ, ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್.ಅನಂತ್, ರೊಟೇರಿಯನ್ ವಿ. ರಾಜಾ ಶೀನಿವಾಸನ್ ಅವರು ಉಪಸ್ಥಿತರಿದ್ದರು.