ಎಂದಿನಂತೆ ಆಹಾರ ಸೇವಿಸುತ್ತಿರುವ ಅವರನ್ನು ಸೋಮವಾರವೇ ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಎದೆ, ಹೊಟ್ಟೆ, ಕೈ, ತೊಡೆ ಸೇರಿ ದೇಹದ 11 ಕಡೆ ಚಾಕು ಇರಿತದಿಂದ ಆಗಿದ್ದ ಗಾಯಗಳು ವಾಸಿಯಾಗುತ್ತಿವೆ. ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ದಿವಾಕರ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.