ಬೆಂಗಳೂರು: `ವಿಚಾರ ಸಾಹಿತ್ಯ ಮತ್ತು ಪೂರಕ ಸಾಹಿತ್ಯಗಳು ಒಂದು ಭಾಷೆಯನ್ನು ಶ್ರೀಮಂತಗೊಳಿಸುತ್ತದೆ. ಒಂದು ಭಾಷೆಗೆ ಸೃಜನಶೀಲ ಸಾಹಿತ್ಯದಷ್ಟೇ ವಿಚಾರ ಸಾಹಿತ್ಯವೂ ಮುಖ್ಯ~ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಟಿ.ವಿ. ವೆಂಕಟರಮಣಯ್ಯ ಅವರ ಸಂಪಾದಿತ `ಸೂಕ್ತಿ ಭಂಡಾರ~ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ಈ ಸಂಗ್ರಹದಲ್ಲಿರುವ ಮೂರು ಸಾವಿರಕ್ಕೂ ಹೆಚ್ಚು ಸೂಕ್ತಿಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ವಹಿಸಿದ್ದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಲ್.ಎನ್. ಮುಕುಂದರಾಜ್ ಸ್ವಾಗತಿಸಿದರು. ಸಂಘಟನಾ ಕಾರ್ಯರ್ಶಿ ಬಿ.ಎ. ರಾಮಯ್ಯ ವಂದಿಸಿದರು.