‘ಈ ವಿಚಾರದಲ್ಲಿ ತಾಲ್ಲೂಕು, ಜಿಲ್ಲಾಪಂಚಾಯ್ತಿ ಸದಸ್ಯರಾಗಲಿ ಅಥವಾ ಶಾಸಕರಾಗಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಎನ್.ಆರ್.ರಮೇಶ್ ಅವರು ಸ್ಥಳಕ್ಕೆ ಬಂದು ಪರಿಶೀಲಿಸದೆ ಯಾರೋ ಹೇಳಿದ ಮಾತನ್ನು ಕೇಳಿಕೊಂಡು ಸಚಿವರ ಹಿಂಬಾಲಕರು ₹ 250 ಕೋಟಿ ಮೌಲ್ಯದ ಜಮೀನನ್ನು ಒತ್ತುವರಿ ಮಾಡಲು ಮುಂದಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ’ ಎಂದು ದೂರಿದರು. ಫಲಾನುಭವಿಗಳು ತಮ್ಮ ನಿವೇಶನಗಳ ಅಸಲಿ ಹಕ್ಕುಪತ್ರಗಳನ್ನು ಮಾಧ್ಯಮದವರಿಗೆ ತೋರಿಸಿ, ಎನ್.ಆರ್.ರಮೇಶ್ ಅವರ ಆರೋಪ ಸುಳ್ಳು ಎಂದರು.