ಪೀಣ್ಯ ದಾಸರಹಳ್ಳಿ: `ದಾಸರಹಳ್ಳಿಯ ಕ್ಷೇತ್ರದಲ್ಲಿ ಪ್ರತಿ ಮನೆಗೆ ಒಂದರಂತೆ ಸಸಿಗಳನ್ನು ನೀಡಲಾಗುವುದು ಅದನ್ನು ನೆಟ್ಟು ಬೆಳೆಸುವ ಮೂಲಕ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು~ ಎಂದು ಶಾಸಕ ಎಸ್.ಮುನಿರಾಜು ಹೇಳಿದರು. ಅವರು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಉದ್ಯಾನದಲ್ಲಿ ಸಸಿ ನೆಟ್ಟು ಮಾತನಾಡಿದರು. ಪಾಲಿಕೆ ಸದಸ್ಯರಾದ ಚಂದ್ರಶೇಖರ್, ಶಶಿ ಶಿವಕುಮಾರ್, ಪುಟ್ಟಮ್ಮ ತಮ್ಮಣ್ಣ, ಜಂಟಿ ಆಯುಕ್ತ ರಾಧಕೃಷ್ಣ, ಉಪಆಯುಕ್ತ ಜನ್ನಪ್ಪ ಇತರರು ಹಾಜರಿದ್ದರು.