ಸುಳ್ಯ: ಸುಳ್ಯದ ಶಾಸ್ತ್ರಿ ವೃತ್ತದ ಬಳಿ ಭಾನುವಾರ ಬೆಳಿಗ್ಗೆ ರಸ್ತೆ ವಿಭಜಕ್ಕೆ ಕಾರೊಂದು ಡಿಕ್ಕಿ ಹೊಡೆದು ಅದರಲ್ಲಿದ್ದ ಬೆಂಗಳೂರಿನ ಕೋರಮಂಗಲದ ನಿವಾಸಿ ಪಳನಿಯಪ್ಪ (62) ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಪಳನಿಯಪ್ಪ ಅಸೌಖ್ಯದಿಂದ ಬಳಲುತ್ತಿದ್ದು, ಪುತ್ತೂರಿನಲ್ಲಿ ಹಳ್ಳಿಮದ್ದು ಮಾಡಲೆಂದು ನಂಜನಗೂಡಿನ ಗುರುಪ್ರಸಾದ್ ಎಂಬವರ ಟೊಯೊಟಾ ಇಟಿಯೋಸ್ ಕಾರಿನಲ್ಲಿ ಮನೆಯವರ ಜತೆ ಬರುತ್ತಿದ್ದರು. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ರಸ್ತೆ ಬಿಟ್ಟುಕೊಡುವ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಪಳನಿಯಪ್ಪ ಅವರು ತೀವ್ರ ಗಾಯ ಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರೆ, ಅವರ ಪತ್ನಿ ಸುಮತಿ, ಸುರೇಶ್ ಮತ್ತು ಲಕ್ಷ್ಮೀ ಎಂಬವರು ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.