ಬೆಂಗಳೂರು: ‘ಜಾಗತಿಕ ಹವಾಮಾನ ಬದಲಾವಣೆಯಿಂದ ಹಲವು ದುಷ್ಪರಿ ಣಾಮಗಳು ಉಂಟಾಗುತ್ತಿವೆ. ಇದನ್ನು ನಿಯಂತ್ರಿಸಲು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ (ಐಸಿಟಿ) ಕ್ಷೇತ್ರದ ಕಂಪೆನಿಗಳು ಪ್ರಮುಖ ಪಾತ್ರ ನಿಭಾಯಿಸ ಬೇಕಾಗಿದೆ’ ಎಂದು ಬೆಂಗಳೂರಿನ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ–ಬಿ) ಪ್ರಾಧ್ಯಾಪಕ ಪ್ರೊ. ಪಿ.ಡಿ. ಜೋಸ್ ತಿಳಿಸಿದರು.
ನಗರದ ಐಐಎಂ–ಬಿನಲ್ಲಿ ‘ಹವಾ ಮಾನ ಬದಲಾವಣೆ ನಿಯಂತ್ರಿಸುವಲ್ಲಿ ಐಸಿಟಿ ಕ್ಷೇತ್ರದ ಪಾತ್ರ’ದ ಬಗೆಗಿನ ಸಿಡಿಪಿ–ಐಐಎಂ–ಬಿ ವರದಿಯನ್ನು ಬಿಡು ಗಡೆಗೊಳಿಸಿ ಅವರು ಮಾತ ನಾಡಿದರು.
ಐಐಎಂ–ಬಿ ನಿರ್ದೇಶಕ ಸುಶೀಲ್ ವಚನಿ ವರದಿ ಬಿಡುಗಡೆ ಗೊಳಿಸಿದರು. ಐಐಎಂ–ಬಿ ಸಹಯೋಗ ದೊಂದಿಗೆ ಕಾರ್ಬನ್ ಡಿಸ್ಕ್ಲೋಸರ್ ಪ್ರಾಜೆಕ್ಟ್ (ಸಿಡಿಪಿ) ಸಂಸ್ಥೆಯು ಸುಮಾರು 35 ದೇಶಗಳ ಪ್ರಮುಖ ಐಟಿ ಕಂಪೆನಿಗಳ ಪ್ರತಿಕ್ರಿಯೆಯನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಿದೆ. ಅದರಲ್ಲಿ ಇನ್ಫೊಸಿಸ್, ಟಿಸಿಎಸ್, ವಿಪ್ರೊ. ಅಸೆಂಚರ್, ಬಿಟಿ, ಗೂಗಲ್, ಐಬಿಎಂ, ಮೈಕ್ರೊಸಾಫ್ಟ್ ಕಂಪೆನಿಗಳೂ ಸೇರಿವೆ.
‘ಹವಾಮಾನ ಬದಲಾವಣೆಯ ಆತಂಕ ಕಂಪೆನಿಗಳನ್ನು ಕಾಡುತ್ತಿದೆ. ಈ ಪ್ರಯುಕ್ತ ತಮ್ಮ ಮಂಡಳಿಯ ಸಭೆಗಳಲ್ಲಿ ಈ ಅಂಶಕ್ಕೆ ಒತ್ತು ನೀಡುತ್ತಿವೆ’ ಎಂದು ಸಿಡಿಪಿ ಇಂಡಿಯಾದ ನಿರ್ದೇಶಕ ದಮಣದೀಪ್ ಸಿಂಗ್ ಹೇಳಿದರು.