ನೆಲಮಂಗಲ: ರಾಜಧಾನಿಗೆ ಸನಿಹವಿರುವ ಗ್ರಾ.ಪಂ.ಗಳು ನಗರ ಪ್ರದೇಶಗಳಾಗಿ ಬೆಳೆಯುತ್ತಿರುವುದರಿಂದ ಅಗತ್ಯ ಮೂಲಭೂತ ಕಲ್ಪಿಸಲು ಹೆಚ್ಚಿನ ಸಂಪನ್ಮೂಲ ಕ್ರೋಡೀಕರಿಸುವ ಅನಿವಾರ್ಯತೆ ಇದೆ ಎಂದು ಜಿ.ಪಂ.ಉಪಕಾರ್ಯದರ್ಶಿ ಕೆ.ಶಿವಣ್ಣ ಹೇಳಿದರು.
ತಾಲ್ಲೂಕಿನ ಅರಿಶಿನಕುಂಟೆ ಪಂಚಾಯ್ತಿಯಲ್ಲಿ ನಡೆದ ಜಮಾಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆದಾಯವನ್ನು ಹೆಚ್ಚಿಸಿಕೊಳ್ಳಲು ಪಂಚಾಯ್ತಿಗೆ ಸಂಬಂಧಿಸಿದ ಜಾಗಗಳನ್ನು ವಾಣಿಜ್ಯ ಮತ್ತು ವಾಹನ ನಿಲುಗಡೆಗಳಿಗೆ ಬಾಡಿಗೆ ನೀಡಬಹುದಾಗಿದೆ ಎಂದರು.
ಅಭಿವೃದ್ಧಿ ಅಧಿಕಾರಿ ಡಿ.ಎಂ. ಪದ್ಮನಾಭ್ ಮಾತನಾಡಿ ಕಳೆದ ಸಾಲಿನಲ್ಲಿ ₨ 2.27ಕೋಟಿಯನ್ನು ತೆರಿಗೆ ರೂಪದಲ್ಲಿ ವಸೂಲಿ ಮಾಡಿದ್ದು, ₨1.67 ಕೋಟಿಗಳನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದರು.