ಸಾಹಿತಿ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಮಾತನಾಡಿ, ‘ಬದುಕಿದ ರೀತಿ ಏನೇ ಇರಬಹುದು. ಆದರೆ, ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ಹಾಗಾಗಿ ಹುಟ್ಟಿದಾಗ, ಸತ್ತಾಗ ಏನು ನಡೆಯಿತು ಎಂಬ ವಿಚಾರ ಬೇಡ. ಬದುಕಿದ್ದಾಗ ಎಷ್ಟು ಮುಖ್ಯವಾಗುತ್ತಾನೋ ಸತ್ತಾಗಲೂ ಅಷ್ಟೇ ಮುಖ್ಯವಾದರೆ ಆತ ನಿಜವಾದ ಮನುಷ್ಯ. ಅನಂತಮೂರ್ತಿ ಅವರು ಮುಖವಾಡ ಹೊತ್ತ ಸಾಹಿತಿ ಆಗಿರಲಿಲ್ಲ’ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ಕಾರ್ಯಕರ್ತರು ಇದ್ದರು.