‘ಈ ಅರವಟಿಗೆ ವ್ಯವಸ್ಥೆಯಿಂದ ತುಂಬಾ ಜನರಿಗೆ ಪ್ರಯೋಜನವಾಗುತ್ತಿದೆ. ಸಂತಪುರ ದೊಡ್ಡ ಹೋಬಳಿ ಕೇಂದ್ರವಾಗಿರುವುದರಿಂದ ಇಲ್ಲಿ ಬೇರೆ ಬೇರೆ ಕಡೆಯಿಂದ ಜನ ಬಂದು ಹೋಗುತ್ತಾರೆ. ಇಲ್ಲಿಂದಲೇ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ. ಪರೀಕ್ಷೆ ಬರೆದು ಮನೆಗೆ ಹೋಗುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಬೀದರ್, ಕಲಬುರಗಿ, ಹೈದರಾಬಾದ್ನಿಂದ ರಾತ್ರಿ ಇಲ್ಲಿ ಬಂದು ಇಳಿದು ತಮ್ಮ ಊರಿಗೆ ಹೋಗುವವರಿಗೆ ಈ ಅರವಟಿಗೆ ತುಂಬಾನೇ ಅನುಕೂಲವಾಗುತ್ತಿದೆ’ ಎಂದು ಸ್ಥಳೀಯರು ಹೇಳುತ್ತಾರೆ.