ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ರವೀಂದ್ರ ನಾರಾಯಣಪುರ ಮಾತನಾಡಿ, ‘ಬಡತನದಲ್ಲೂ ಹಿರಿಯ ಮಗನಿಗೆ ಐಐಟಿ ಶಿಕ್ಷಣ ನೀಡಿ ಯುಪಿಎಸ್ಸಿ ಪರೀಕ್ಷೆಯ ಕೋಚಿಂಗ್ಗೆ ದೆಹಲಿಗೆ ಕಳಿಸಿರುವುದು ಹಾಗೂ ಐವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ತಂದೆ ತಾಯಿಯ ಪರಿಶ್ರಮ ಹೇಳತೀರದು. ಇವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಆರ್ಥಿಕ ಸಹಾಯ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು’ ಎಂದರು.
ಕರ್ನಾಟಕ ವಸತಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ಪರವಾಗಿ ಬೀದರ್ ಜಿಲ್ಲಾ ಸಮನ್ವಯಾಧಿಕಾರಿ ಭೀಮರೆಡ್ಡಿ ರಾಸನೆ, ಸಹಾಯಕ ಕೃಷಿ ನಿರ್ದೇಶಕ ಮಾರ್ತಂಡ ಮಚಕೂರಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಶರಣಬಸಪ್ಪ ದಂಡೆ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟ, ವಿದ್ಯಾರ್ಥಿನಿ ತಾಯಿ ಅನಸೂಯಾ ಉಪಸ್ಥಿತರಿದ್ದರು.