ದೃಷ್ಟಾಂತವೊಂದನ್ನು ಉಲ್ಲೇಖಿಸಿದ ಅವರು, ಹಿಂದೆ ಲಂಕೆಗೆ ಸಮುದ್ರದ ಮೂಲಕವೇ ಹೋಗಬೇಕಿತ್ತು. ವಾನರರು ದಾರಿ ನಿರ್ಮಿಸಲು ಸಮುದ್ರದಲ್ಲಿ ಕಲ್ಲುಗಳನ್ನು ಎತ್ತಿ ಹಾಕಿದಾಗ, ಅವು ತೇಲಿದವು. ಆದರೆ, ರಾಮ ಎಸೆದ ಕಲ್ಲುಗಳು ನೀರೊಳಗೆ ಮುಳುಗಿದವು. ಏಕೆ ಹೀಗಾಯಿತು ಎಂದು ರಾಮ ಕೇಳಿದಾಗ, ದೇವರೇ ಕೈಬಿಟ್ಟರೆ ಕಲ್ಲುಗಳು ಮುಳುಗದಿರಲು ಹೇಗೆ ಸಾಧ್ಯ ಎಂದು ಆಂಜನೇಯ ಉತ್ತರಿಸಿದ್ದರು. ಕಾರಣ, ಪರಮಾತ್ಮ ಕೈಬಿಟ್ಟರೆ ಯಾರೂ ಕೈಹಿಡಿಯಲು ಸಾಧ್ಯವಿಲ್ಲ. ಪೂಜೆ, ಜಪ, ತಪ, ಧ್ಯಾನ ಮಾಡಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.