ಸ್ಥಳೀಯ ಅಮರೇಶ್ವರ ಕಾಲೇಜಿನಲ್ಲಿ ಗುಮಾಸ್ತರಾಗಿದ್ದ ಆಡಿವೆಪ್ಪ ಪಟ್ನೆ ಅವರು 2014ರಲ್ಲಿ ನಿವೃತ್ತರಾಗಿದ್ದಾರೆ. ಅಲ್ಲಿಂದ ಪ್ರತಿ ವರ್ಷ ಸೈನಿಕ ಕಲ್ಯಾಣ ಖಾತೆಗೆ ₹1,100 ಜಮಾ ಮಾಡುತ್ತಾ ಬಂದಿದ್ದಾರೆ. ಬಸವತತ್ವ ಅನುಯಾಯಿಯಾದ ಅವರು ಬಿಡುವಿನ ವೇಳೆಯಲ್ಲಿ ಕೃಷಿ ಕಾಯಕದ ಜತೆಗೆ ಹಳ್ಳಿ ಹಳ್ಳಿಗೆ ಹೋಗಿ ಬಸವತತ್ವ ಪ್ರಚಾರ ಮಾಡುತ್ತಾರೆ.