`ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸಿದ್ದರಾಮಯ್ಯನವರು ಘೋಷಿಸಿ ಎಷ್ಟೋ ದಿನಗಳ ಕನಸು ನನಸು ಮಾಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವುದಕ್ಕೆ ಕ್ರಮ ತೆಗೆದುಕೊಂಡರು. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಹೆಸರಿಟ್ಟರು. ಮಹಾತ್ಮಾ ಗಾಂಧೀಜೀಯವರು ಸಹ ಬೆಳಗಾವಿ ಅಧಿವೇಶನಕ್ಕೆ ಬಂದಾಗ ಬಸವಣ್ಣನವರು ಈಗ ಇರುತ್ತಿದ್ದರೆ ಜಗತ್ತಿಗೆ ಪೂಜ್ಯರು ಆಗಿರುತ್ತಿದ್ದರು. ಅವರ ಅನುಯಾಯಿಗಳು ಬಸವತತ್ವ ಆಚರಿಸಿದರೆ ಜಗತ್ತನ್ನೇ ಬೆಳಗಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು' ಎಂದರು.
’ಉತ್ತರ ಭಾರತದ ಸಂತರ, ಸತ್ಪುರುಷರ ಬಗ್ಗೆ ಇಲ್ಲಿನ ಪಠ್ಯದಲ್ಲಿ ಮಾಹಿತಿ ಇದೆ. ಆದರೆ, ಅದೇ ಆ ರಾಜ್ಯಗಳಲ್ಲಿನ ಶಾಲಾ ಪಠ್ಯದಲ್ಲಿ ಬಸವಣ್ಣನವರ, ಅಕ್ಕ ಮಹಾದೇವಿ, ಕನಕದಾಸ, ಸಂಗೊಳ್ಳಿ ರಾಯಣ್ಣನವರ ಕುರಿತು ಮಾಹಿತಿ ದೊರಕುವಂತೆ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಕ್ರಮ ಜರುಗಿಸಬೇಕು' ಎಂದು ಮನವಿ ಮಾಡಿದರು.