ಶನಿವಾರ ಭದ್ರಕಾಳಿ, ರಾಚಣ್ಣ ಸ್ವಾಮಿ ಕಲ್ಯಾಣ ಮಹೋತ್ಸವ ನಡೆಯುತ್ತದೆ. ನಂತರ ರಾಚಣ್ಣ ದೇವರಿಗೆ ಅಶ್ವವಾಹನ ಸೇವೆ ಜರುಗುತ್ತದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ, ವಿದ್ಯುತ್ ದೀಪಾಲಂಕಾರ, ಡೊಳ್ಳು ಕುಣಿತ, ಸಿಡಿಮದ್ದುಗುಂಡುಗಳ ಚಿತ್ತಾರಗಳೊಂದಿಗೆ ಜರುಗುತ್ತದೆ. ನಂತರ ರಾತ್ರಿ ಸಂಗೀತ ಕಲಾವಿದರಿಂದ ರಾತ್ರಿ ಭಜನಾ ಕಾರ್ಯಕ್ರಮ ನಡೆದು ಮುಂಜಾವಿನಲ್ಲಿ ದೇವರಿಗೆ ಮಂಗಳಾರತಿ ಬೆಳಗುವ ಮೂಲಕ ಜಾತ್ರೆಗೆ ಮುಕ್ತಾಯಗೊಳ್ಳುತ್ತದೆ.