‘ಈ ಹಿಂದೆ ರಾಜ, ಮಹಾರಾಜರ ಕಾಲದಲ್ಲಿ ಗುರು ಶಿಷ್ಯರ ಸಂಬಂಧ ಬಹಳ ಎತ್ತರದಲ್ಲಿತ್ತು ಎನ್ನುವುದಕ್ಕೆ ಅನೇಕ ಉದಾಹರಣೆಗಳಿವೆ. ರಾಜರು ಗುರುಗಳನ್ನು ಮಾರ್ಗದರ್ಶನಕ್ಕೆಂದು ತಮ್ಮ ಆಸ್ತಾನದಲ್ಲಿರಿಸಿಕೊಳ್ಳುತ್ತಿದ್ದರು. ಆದರೆ ವಿದ್ಯಾಭ್ಯಾಸದ ಸಮಯದಲ್ಲಿ ಗುರುಗಳಿರುವ ಕಾಡಿನ, ಅವರ ಗುಡಿಸಲಿಗೆ ಹೋಗಿ ವಿದ್ಯೆ ಕಲಿಯುತ್ತಿದ್ದರು. ಇಂಥ ಔದಾರ್ಯಯುಳ್ಳ ಜಗತ್ತಿನ ಚೊಚ್ಚಲ ದೇಶ ನಮ್ಮದಾಗಿದೆ’ ಎಂದು ಬಣ್ಣಿಸಿದರು.