ಗ್ರಾಮದ ಬಸವೇಶ್ವರ ವೃತ್ತದ ಬಳಿ ಬಂದ ಮೊಸಳೆ ಮೇಲೆ ಗೋಣಿ ಚೀಲ ಹಾಕಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಆಗಾಗ ಗ್ರಾಮದ ಸುತ್ತ ಮೊಸಳೆ ಜನರ ಕಣ್ಣಿಗೆ ಬಿದ್ದಿದೆ. ವಿಷಯ ಅರಣ್ಯ ಇಲಾಖೆಗೆ ಮುಟ್ಟಿಸಿದರೂ ಅದು ಸಿಗಲಿಲ್ಲ. ಇಂದು ರಾತ್ರಿ ಊರಲ್ಲಿ ಬಂದದ್ದು ಗೊತ್ತಾಗಿ ಅದನ್ನು ಹಿಡಿದು ಕಟ್ಟಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.