‘ನನಗೆ ಇರುವುದು ಎರಡು ಎಕರೆ ಜಮೀನು. ಈ ಜಮೀನಿನಲ್ಲಿ ಸೋಯಾ, ತೊಗರಿ ಬೆಳೆದು ಬರುವ ಉತ್ಪನ್ನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿತ್ತು. ಈ ಕಾರಣ ಒಬ್ಬ ಮಗ ಶಾಲೆ ಬಿಟ್ಟು ಕೆಲಸ ಅರಸಿ ಹೈದರಾಬಾದ್ಗೆ ಹೋದ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಏನಾದರೂ ಮಾಡಿ ಮಗನನ್ನು ಊರಿಗೆ ವಾಪಸ್ ಕರೆ ತರಬೇಕೆಂದು ಯೋಚಿಸಿದೆ. ಈ ವೇಳೆ ಗೆಳೆಯರೊಬ್ಬರು ₹50 ಸಾವಿರ ಮೌಲ್ಯದ ಮುರ್ರಾ ತಳಿ ಎಮ್ಮೆ ಕೊಡಿಸಿದರು. ಅದು ನಿತ್ಯ 15 ಲೀಟರ್ ಹಾಲು ಕೊಡುತ್ತಿತ್ತು.