ಹನೂರು: ದೈಹಿಕವಾಗಿ ನ್ಯೂನತೆ ಇದ್ದರೂ, ಮಾನಸಿಕವಾಗಿ ಸದೃಢವಾಗಿರುವ ತಾಲ್ಲೂಕಿನ ಕಣ್ಣೂರು ಗ್ರಾಮದ ಪ್ರೇಮಜ್ಯೋತಿ ಎಂಬುವವರು, ಪ್ರಾಥಮಿಕ ಶಿಕ್ಷಣ ತೊರೆದ 22 ವರ್ಷಗಳ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದರು. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.