ಸಾಮಾನ್ಯವಾಗಿ ಜಿಲ್ಲೆಯಲ್ಲಿ ಹಲಸನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆಯುವವರು ತೀರಾ ಕಡಿಮೆ. ಕೂಡ್ಲೂರು,ಆಲೂರು,ಚಂದಕವಾಡಿ,ಮಲ್ಲಿಪುರ,ಸರಗೂರುಮೋಳೆ,ಉಡಿಗಾಲ,ಕೊತ್ತಲವಾಡಿ,ತೆರಕಣಾಂಬಿ ಸೇರಿದಂತೆ ಹಲವೆಡೆ ರೈತರು ತಮ್ಮ ತೋಟಗಳಲ್ಲಿ, ಜಮೀನುಗಳಲ್ಲಿ ಇತರೆ ಬೆಳಗಳ ಮಧ್ಯೆ ಹಲಸನ್ನು ಬೆಳೆಯುತ್ತಿದ್ದಾರೆ. ಈ ಸಮಯದಲ್ಲಿ ಇದೇ ಇವರ ಆದಾಯದ ಮೂಲವಾಗಿತ್ತು. ಆದರೆ, ಈಗ ಬೇಡಿಕೆ ಕಡಿಮೆಯಾಗಿರುವುದರಿಂದ ಗುತ್ತಿಗೆದಾರರು ಖರೀದಿಗೆ ಮುಂದಾಗುತ್ತಿಲ್ಲ.