ಮಾಧ್ಯಮಗಳೊಂದಿಗೆ ಮಾತನಾಡಿದ ರುದ್ರೇಶ್, ‘ಯಡಿಯೂರಪ್ಪ ಜನ್ಮದಿನದ ಅಂಗವಾಗಿ ರಾಜ್ಯದಾದ್ಯಂತ 80 ಜನರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಲು ತೀರ್ಮಾನಿಸಿದ್ದೆವು. ಅದರಂತೆ, ಮೈಸೂರಿನಲ್ಲಿ 20, ದಾವಣಗೆರೆಯಲ್ಲಿ 20, ಚಾಮರಾಜನಗರದಲ್ಲಿ 14 ಟ್ರ್ಯಾಕ್ಟರ್ ವಿತರಿಸಲಾಗಿದೆ. ಕ್ಷೇತ್ರದ ಇನ್ನೂ 20 ಜನರಿಗೆ ನೀಡಬೇಕಾಗಿದೆ. ಸಾಲ ಇನ್ನಷ್ಟೇ ಮಂಜೂರಾಗಬೇಕಾಗಿದೆ’ ಎಂದರು.