ಯಳಂದೂರು: ತಾಲ್ಲೂಕಿನ ಕೆಸ್ತೂರಿನಲ್ಲಿ ಸೋಮವಾರ ನಾಯಿಗಳ ಗುಂಪು ಮೇಕೆ ಮೇಲೆ ದಾಳಿ ಮಾಡಿದ್ದು, ಒಂದು ಮರಿ ಮೃತಪಟ್ಟಿದೆ.
ಈಚೆಗೆ ಗ್ರಾಮದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಜಾನುವಾರುಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ. ಸಾಕಣೆದಾರರು ಇಲ್ಲದಿದ್ದರೆ ಕಚ್ಚಿ ಕೊಲ್ಲುತ್ತವೆ.
‘ಮೇಕೆಗಳು ಸಂಜೆ ವಾಪಸ್ ಮನೆಗೆ ಬರುವಾಗ ₹15 ಸಾವಿರದ ಮೇಕೆಯನ್ನು ನಾಯಿಗಳು ಕೊಂದಿವೆ. ಮಕ್ಕಳು ಮತ್ತು ಮಹಿಳೆಯರ ಮೇಲೆಯೂ ದಾಳಿ ಮಾಡುತ್ತವೆ. ಇದರಿಂದ ಗ್ರಾಮಸ್ಥರು ಜೀವ ಭಯದಲ್ಲಿ ಸಂಚರಿಸಬೇಕಿದೆ. ಸಂಬಂಧಪಟ್ಟವರು ನಷ್ಟ ಭರಿಸಬೇಕು’ ಎಂದು ಮೇಕೆ ಮಾಲೀಕ ಸಿದ್ದಮಾದಯ್ಯ ಒತ್ತಾಯಿಸಿದ್ದಾರೆ.