‘ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ತೆಂಗಿನಕಾಯಿ ಒಡೆದರೆ ಸ್ವಲ್ಪ ಹಣ ದೊರೆಯುವುದರಿಂದ ನನ್ನ ಕುಟುಂಬದ ಜೀವನ ನಿರ್ವಹಣೆಯಾಗುತ್ತದೆ. ಆದರೆ, ದೇವಾಲಯದ ಆಡಳಿತ ಮಂಡಳಿ ತೆಂಗಿನಕಾಯಿ ಒಡೆಯಲು ಅವಕಾಶ ನೀಡುತ್ತಿಲ್ಲ. ಹಾಗಾಗಿ, ಬೀಗ ಹಾಕಿದ್ದು, ಅವರು ಅವಕಾಶ ನೀಡುವವರೆಗೂ ಬೀಗ ತೆಗೆಯುವುದಿಲ್ಲ’ ಎಂದು ಅರ್ಚಕ ಶಿವನಂಜಪ್ಪ ಪಟ್ಟುಹಿಡಿದಿದ್ದಾರೆ.