ಶಿಡ್ಲಘಟ್ಟ: ನಗರದ ಮಯೂರ ವೃತ್ತದಲ್ಲಿನ ಶ್ರೀರಾಮ ಅಗ್ರೋಟೆಕ್ ರಾಸಾಯನಿಕ ಅಂಗಡಿಯಲ್ಲಿ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಹಣ, ಹೆಚ್ಚು ಬೆಲೆಯ ರಾಸಾಯನಿಕ ಔಷಧಿಗಳನ್ನು ಭಾನುವಾರ ರಾತ್ರಿ ಕದ್ದೊಯ್ದಿದ್ದಾರೆ.
ನಗದು ಹಾಗೂ ಔಷಧಿ ಸೇರಿ ₹1.30 ಲಕ್ಷ ಮೌಲ್ಯದ ಹಣ, ಔಷಧಿ ಕಳ್ಳತನ ನಡೆದಿದೆ. ಅಂಗಡಿ ಮಾಲೀಕ ಶಶಿಕುಮಾರ್ ದೂರು ನೀಡಿದ್ದು ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.