ಹೊಂಡದಿಂದ ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಾಬು ಬಿದಿದ್ದಾರೆ. ಮೊದಲೇ ಸುಸ್ತಾಗಿದ್ದ ಅವರು ನೀರಿನಿಂದ ಮೇಲಕ್ಕೆ ಬರಲಾಗದೆ ಮುಳುಗಿದ್ದಾರೆ. ಅವರ ಪುತ್ರ ತೇಜು ಜೋರಾಗಿ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಬಂದು ಬಾಬು ಅವರನ್ನು ರಕ್ಷಣೆ ಮಾಡಿದರು. ಆದರೆ ಅಷ್ಟು ಹೊತ್ತಿಗೆ ಬಾಬು ಮೃತಪಟ್ಟಿದ್ದರು ಎಂದು ಮೃತರ ಸಹೋದರ ಶಂಕರಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.