ಗೌರಿಬಿದನೂರು ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಅವರು ಕೌರವೇಂದ್ರನ (ದುರ್ಯೋಧನ) ಪಾತ್ರ ನಿರ್ವಹಿಸಿದ್ದರು. ಅವರ ಅಮೋಘ ಅಭಿನಯಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು. ಶಾಸಕರು, ಮಾಜಿ ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳು ನಾಟಕವನ್ನು ಕಣ್ತುಂಬಿಕೊಂಡರು. ಭಾನು ಪ್ರಕಾಶ್ ನೀನಾಸಂ ನಾಟಕ ನಿರ್ದೇಶಿಸಿದ್ದರೆ, ಸಿದ್ದೇಶ್ ಕಲಾ ವಿನ್ಯಾಸ ಮಾಡಿದ್ದರು.