ಶನಿವಾರ ಆಯೋಜಿಸಿದ್ದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಚಿಂತಾಮಣಿ-ಹೊಸಕೋಟೆಯ ಕೆ.ಶಿಪ್ ರಸ್ತೆಯ ನಿರ್ಮಾಣ ಸಮಯದಲ್ಲೇ ಕೆರೆಯ ಅಭಿವೃದ್ಧಿ ಯೋಜನೆ ರೂಪಿಸಲಾಗಿತ್ತು. ₹50 ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಲಾಗಿತ್ತು. ಪಕ್ಕದಲ್ಲಿರುವ ಯಾದವ ವಿದ್ಯಾರ್ಥಿನಿಲಯವಿರುವ ಸ್ಥಳವೂ ಕೋಡಿಯ ಭಾಗವಾಗಿತ್ತು. ಯಾದವ ವಿದ್ಯಾರ್ಥಿನಿಲಯಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಕೆರೆಯ ಕೋಡಿಯನ್ನು ಹೊಸದಾಗಿ ರೂಪಿಸಲಾಗಿತ್ತು ಎಂದು ಮಾಹಿತಿ ನೀಡಿದರು.