ತಾಲ್ಲೂಕಿನ ದೇವರಾಜಪಲ್ಲಿ ಗ್ರಾಮದ ಆನಂದ (40) ಆತ್ಮಹತ್ಯೆ ಮಾಡಿಕೊಂಡವರು. ಪಟ್ಟಣದ 9ನೇ ವಾರ್ಡ್ನಲ್ಲಿ ವಾಸವಾಗಿದ್ದರು. ಟೆಂಪೋ ಚಾಲಕರಾಗಿದ್ದರು. ಕೊತ್ತಪಲ್ಲಿ ಗ್ರಾಮದ ಬಳಿಯ ನೇಣು ಹಾಕಿಕೊಂಡಿರುವ ರೀತಿಯಲ್ಲಿ ಶವ ಕಂಡು ಬಂದಿದೆ. ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ ಕೂಡಲೇ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಲಾಯಿತು.