ಲಾರಿ ಚಾಲಕ ನಾಗರಾಜ್ ಅವರಿಗೆ ಕೊರೊನಾ ತಪಾಸಣೆಗೆ ಒಳಗಾಗಲು ಆಶಾ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ ತಿಂಗಳ ಹಿಂದೆ ತಿಳಿಹೇಳಿದ್ದರು. ಆಗ ನಾಗರಾಜ್ ಹೈದರಾಬಾದ್ಗೆ ವಾಪಸ್ ಆಗಿದ್ದರು. ಈಚೆಗೆ ಮತ್ತೆ ಗ್ರಾಮಕ್ಕೆ ಮರಳಿದ್ದರು. ಆಶಾ ಕಾರ್ಯಕರ್ತೆ ಮತ್ತೆ ತಪಾಸಣೆಗೆ ಸಲಹೆ ಮಾಡಿದ್ದರು. ಸಿಟ್ಟಿಗೆದ್ದ ನಾಗರಾಜ್, ಹಾಗೂ ಸಂಬಂಧಿಗಳು ಕಾರ್ಯಕರ್ತೆ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.