ಚಿಕ್ಕಬಳ್ಳಾಪುರ: ಅತ್ತ ರಾಜಧಾನಿಯಲ್ಲಿ ಜೆಡಿಎಸ್, ಕಾಂಗ್ರೆಸ್ ವರಿಷ್ಠರ ನಡುವೆ ಮೈತ್ರಿ ಸರ್ಕಾರದ ಸಂಪುಟ ರಚನೆ ವಿಚಾರವಾಗಿ ಕರಸತ್ತು ನಡೆದರೆ, ಇತ್ತ ಜಿಲ್ಲೆಯಲ್ಲಿ ಶಾಸಕರ ಬೆಂಬಲಿಗರಲ್ಲಿ ತಮ್ಮ ನಾಯಕರು ಹೊಸ ಸರ್ಕಾರದಲ್ಲಿ ಸಚಿವರಾಗುತ್ತಾರೆ ಎಂಬ ಆಸೆಗಳು ಗರಿಗೆದರಿ, ಅನೇಕ ವದಂತಿಗಳನ್ನು ಹುಟ್ಟು ಹಾಕುತ್ತಿವೆ.