ಸುಂದರ್ ರಾಜ್ ಎಂಬುವರು ಆ್ಯಸಿಡ್ ದಾಳಿಗೆ ಒಳಗಾದವರು. ಇವರು ನಾಯಿ ಸಾಕಿದ್ದು, ಅದು ಬೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯ ಜೇಮ್ಸ್ ಹಾಗೂ ಮರಿಯಮ್ಮ ಎಂಬುವರು ಅವರೊಂದಿಗೆ ಜಗಳವಾಡಿದ್ದರು. ಮಾತಿಗೆ ಮಾತು ಬೆಳೆದು, ಸುಂದರ್ ರಾಜ್ ನಾಯಿ ಹೆಸರಿನಲ್ಲಿ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಜೇಮ್ಸ್ ಅವರ ಮೇಲೆ ಆ್ಯಸಿಡ್ ಎರಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಸುಂದರ್ ರಾಜ್ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಜೇಮ್ಸ್ ಹಾಗೂ ಮರಿಯಮ್ಮ ತಲೆಮರೆಸಿಕೊಂಡಿದ್ದಾರೆ. ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.