<p><strong>ಚಿಕ್ಕಮಗಳೂರು: </strong>ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶಿಸಲಾಯಿತು.</p>.<p>ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಸಂಸ್ಥೆಯ ಸದಸ್ಯರು ಜಾಥಾ ನಡೆಸಿದರು. ವಾಕ್, ಶ್ರವಣ ದೋಷ ತಡೆಗಟ್ಟುವ ಬಗ್ಗೆ ಘೋಷಣೆ ಕೂಗಿದರು.</p>.<p>ಕೆಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ಆಜಾದ್ ಪಾರ್ಕ್ ವೃತ್ತದಲ್ಲಿ ವಾಕ್, ಶ್ರವಣ ದೋಷ ತಡೆಗಟ್ಟುವ ಬೀದಿ ನಾಟಕ ಪ್ರದರ್ಶಿಸಿದರು.<br />ಸಂಸ್ಥೆಯ ಮುಖ್ಯಸ್ತೆ ಸ್ವಪ್ನಾ ಮಾತನಾಡಿ, ಜನರಿಗೆ ಜೀವನ ನಡೆಸಲು ಸಂವಹನ ಅಗತ್ಯ. ಅದರ ಬಗ್ಗೆ ಜನರಿಗೆ ಮಾಹಿತಿ ನೀಡುವ ನಿಮಿತ್ತ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.</p>.<p>ಸೀಳು ತುಟಿ ಮತ್ತು ಅಂಗುಳು, ಧ್ವನಿಯ ತೊಂದರೆ, ನರಗಳ ದೌರ್ಬಲ್ಯ, ಉಚ್ಛಾರಣೆ ದೋಷವನ್ನು ಜನರು ಕಡೆಗಣಿಸುತ್ತಾರೆ. ಮಕ್ಕಳಿರುವಾಗಲೇ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ, ಸಮಸ್ಯೆ ನಿವಾರಸಿಬಹುದು. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.</p>.<p>ಸಂಸ್ಥೆಯ ಸುಜನ್, ಅರುಣ್ ರಾಜ್, ಹರೀಶ್, ಪೃಥ್ವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶಿಸಲಾಯಿತು.</p>.<p>ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತದವರೆಗೆ ಸಂಸ್ಥೆಯ ಸದಸ್ಯರು ಜಾಥಾ ನಡೆಸಿದರು. ವಾಕ್, ಶ್ರವಣ ದೋಷ ತಡೆಗಟ್ಟುವ ಬಗ್ಗೆ ಘೋಷಣೆ ಕೂಗಿದರು.</p>.<p>ಕೆಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ಆಜಾದ್ ಪಾರ್ಕ್ ವೃತ್ತದಲ್ಲಿ ವಾಕ್, ಶ್ರವಣ ದೋಷ ತಡೆಗಟ್ಟುವ ಬೀದಿ ನಾಟಕ ಪ್ರದರ್ಶಿಸಿದರು.<br />ಸಂಸ್ಥೆಯ ಮುಖ್ಯಸ್ತೆ ಸ್ವಪ್ನಾ ಮಾತನಾಡಿ, ಜನರಿಗೆ ಜೀವನ ನಡೆಸಲು ಸಂವಹನ ಅಗತ್ಯ. ಅದರ ಬಗ್ಗೆ ಜನರಿಗೆ ಮಾಹಿತಿ ನೀಡುವ ನಿಮಿತ್ತ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.</p>.<p>ಸೀಳು ತುಟಿ ಮತ್ತು ಅಂಗುಳು, ಧ್ವನಿಯ ತೊಂದರೆ, ನರಗಳ ದೌರ್ಬಲ್ಯ, ಉಚ್ಛಾರಣೆ ದೋಷವನ್ನು ಜನರು ಕಡೆಗಣಿಸುತ್ತಾರೆ. ಮಕ್ಕಳಿರುವಾಗಲೇ ಅವುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದರೆ, ಸಮಸ್ಯೆ ನಿವಾರಸಿಬಹುದು. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.</p>.<p>ಸಂಸ್ಥೆಯ ಸುಜನ್, ಅರುಣ್ ರಾಜ್, ಹರೀಶ್, ಪೃಥ್ವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>