‘ಯಡಿಯೂರಪ್ಪ ಅವರು ನನಗೆ ಸಮಾಧಾನ ಹೇಳಿ, ನಿನಗೆ ಈ ಬಾರಿ ಟಿಕೆಟ್ ಎಂದು ಹೇಳಿದ್ದಾರೆ. ಜನರು ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ನನಗೆ ಟಿಕೆಟ್ ನೀಡದಂತೆ ಮಾಡುತ್ತಿದ್ದಾರೆ. ಇದು ಒಳ್ಳೆಯ ನಡವಳಿಕೆಯಲ್ಲ. ಎಲ್ಲ ಕೆಲಸಗಳನ್ನು ಮಾಡಿದ್ದು ನಾನು. ಆದರೆ, ಪಕ್ಷ ಅಂತ ಹೇಳುತ್ತಾ ಬಂದಿದ್ದೇನೆ. ನನಗೆ ಕುಟುಂಬ ಇಲ್ಲ. ಮೂಡಿಗೆರೆಗೆ ನಿಸ್ವಾರ್ಥ ಸೇವೆ ನೀಡಿದ್ದೇನೆ. ನನ್ನನ್ನು ತುಳಿಯುವಂತಹ ಷಡ್ಯಂತ್ರ ನಡೆಯುತ್ತಿದೆ. ನಾನು ಪರಿಶಿಷ್ಟನೆಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಹೇಳಿದರು.