ನರಸಿಂಹರಾಜಪುರ: ರಾಷ್ಟ್ರೀಯ ವಿಕಾಸ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ರಬ್ಬರ್ ನೆಲಹಾಸನ್ನು ಶಾಸಕ ಟಿ.ಡಿ.ರಾಜೇಗೌಡ ಮಂಗಳವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ‘ರಾಷ್ಟ್ರೀಯ ವಿಕಾಸ ಯೋಜನೆಯಡಿ ಪಶುಸಂಗೋಪನಾ ಇಲಾಖೆಯಿಂದ ತಾಲ್ಲೂಕಿನಲ್ಲಿ 20 ಹಾಗೂ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ 5ಜನ ಫಲಾನುಭವಿಗಳು ಒಟ್ಟು 25ಫಲಾನುಭವಿಗಳು ಆಯ್ಕೆಯಾಗಿದ್ದರೆ. ಒಂದು ರಬ್ಬರ್ ನೆಲಹಾಸಿಗೆ ₹2999 ಪಾವತಿಸಿದರೆ ಇನ್ನೊಂದು ರಬ್ಬರ್ ನೆಲಹಾಸು ಉಚಿತವಾಗಿ ನೀಡಲಾಗುತ್ತದೆ. ಇಂದು ಬಂದಿರುವ ಫಲಾನುಭವಿಗಳಿಗೆ ವಿತರಿಸಿ ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯ ಸೈಯದ್ ವಸೀಂ, ಗ್ರಾಮ ಪಂಚಾಯಿತಿ ಸದಸ್ಯರಾದ ಬೀನು,ಸುನಿಲ್ ಕುಮಾರ್, ನರೇಂದ್ರ, ಮುಖಂಡರಾದ ಎಸ್.ಡಿ.ರಾಜೇಂದ್ರ, ಶ್ರೀಧರ್, ಎಚ್.ಎಂ.ಶಿವಣ್ಣ, ಪಶುವೈದ್ಯ ಡಾ.ಶಿವಕುಮಾರ್ ಮತ್ತಿತರರಿದ್ದರು.