‘ಇಲ್ಲಿ ಕಾಡಾನೆಗಳ ಹಾವಳಿ ನಿಂತಿಲ್ಲ. ಕೆಂಜಿಗೆ ಗ್ರಾಮದ ಬಳಿ ನಡೆಸಿದ ಕಾರ್ಯಾಚರಣೆಯ ವೇಳೆ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಒಂದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಆದರೆ ದುರ್ಗಮ ಪ್ರದೇಶ ಎಂಬ ಕಾರಣಕ್ಕೆ ಆ ಕಾಡಾನೆಯನ್ನು ಹಿಡಿಯದೇ ಬಿಡಲಾಯಿತು. ಈಗ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿದ್ದು, ಆತಂಕ ಸೃಷ್ಟಿಸಿದೆ. ಮತ್ತೆ ಕಾಡಾನೆ ದಾಳಿ ನಡೆಸಿದರೆ, ಅರಣ್ಯ ಇಲಾಖೆಯೇ ಹೊಣೆ ’ ಎಂದು ಸ್ಥಳೀಯರು ದೂರಿದ್ದಾರೆ.