ಮಧ್ಯಾಹ್ನ 3.45ರ ಹೊತ್ತಿಗೆ ಪುಷ್ಪಾಲಂಕೃತ ಟ್ರಾಕ್ಟರ್ನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಾದ್ಯ ಮೇಳ, ಡಿ.ಜೆ ಸಂಗೀತದ ಮೆರುಗಿನಲ್ಲಿ ಮೆರವಣಿಗೆ ಸಾಗಿತು.ಯುವಜನರು ಡಿಜೆ ಸಪ್ಪಳಕ್ಕೆ ನರ್ತಿಸಿ ಸಂಭ್ರಮಿಸಿದರು. ವಾಹನವೊಂದರಲ್ಲಿ ಸಾವರ್ಕರ್ ಭಾವಚಿತ್ರವನ್ನು ಒಯ್ಯಲಾಯಿತು. ಪೊಲೀಸ್ ಭದ್ರತೆಯಲ್ಲಿ ಸಾಗಿತು. ಕಾಫಿನಾಡು ಚಂದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯು ಮಲ್ಲಂದೂರು ರಸ್ತೆ, ವಿಜಯಪುರ ಬಡಾವಣೆ, ಡಿಎಸಿಜಿ ಪಾಲಿಟೆಕ್ನಿಕ್ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಹಾದು ದಂಟರಮಕ್ಕಿ ಕೆರೆ ತಲುಪಿತು.