ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘ಕನ್ನಡಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿ ಇದೆ. ಬಂಗಾಳಿ ಸಾಹಿತ್ಯದ ಬಳಿಕ ಕನ್ನಡ ಭಾಷೆಗೆ ಉತ್ಕೃಷ್ಟವಾದ ಸ್ಥಾನವಿದೆ. ನಮ್ಮ ಆಚರಣೆಗಳು, ಸಂಪ್ರದಾಯಗಳ ನಡುವೆ ಕನ್ನಡದ ಗ್ರಾಮ್ಯ ಭಾಷೆಯಿದೆ. ಜಾನಪದ ಸಾಹಿತ್ಯ, ಗೀತೆ, ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡತನದ ನೆಲೆಗಟ್ಟಿದೆ’ ಎಂದರು.