‘ಉದ್ಯೋಗ ಖಾತರಿಯಲ್ಲಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೆಲಸದ ಜಾಗದಲ್ಲಿ ಮಕ್ಕಳ ಪೋಷಣೆ, ನಿರ್ದಿಷ್ಟ ಸಮಯದಲ್ಲಿ ಕೂಲಿ, ನಿಗದಿತ ಸಮಯದಲ್ಲಿ ಕೂಲಿ ಪಾವತಿಯಂತಹ ಸೌಲಭ್ಯಗಳಿವೆ. ಯೋಜನೆಯಲ್ಲಿ ಕೃಷಿ, ತೋಟಗಾರಿಕೆ ಪ್ರದೇಶಗಳ ವಿಸ್ತರಣೆಗೆ ಅವಕಾಶವಿರುವುದರಿಂದ ಜನರು ಯೋಜನೆಯ ಲಾಭ ಪಡೆದು ಆಸ್ತಿಗಳನ್ನು ಸೃಜಿಸಿಕೊಳ್ಳಬಹುದು’ ಎನ್ನುತ್ತಾರೆ ಯೋಜನೆಯ ಸಹಾಯಕ ನಿರ್ದೇಶಕ ಡಿ.ಡಿ ಪ್ರಕಾಶ್.