ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ಸಿಗಂದೂರು ಕ್ಲಿನಿಕ್ ಹಾಗೂ ವಸಡು ರೋಗ ಕ್ಲಿನಿಕ್ ಮತ್ತು ಎಚ್.ಕೆ.ಬಿ.ಎನ್ ಲ್ಯಾಬೋರೇಟರಿ, ಮಾರುತಿ ಡಯಾಗ್ನಾಸ್ಟಿಕ್ ಲ್ಯಾಬ್, ವೆಂಕಟೇಶ್ವರ ಲ್ಯಾಬ್, ಕಾಮಧೇನು ಲ್ಯಾಬ್ಗೆ ಭೇಟಿ ನೀಡಿದ ಅಧಿಕಾರಿಗಳು ನೊಂದಣಿಯಾಗದ ಮತ್ತು ಸಮರ್ಪಕ ದಾಖಲೆ ನೀಡದ ಕ್ಲಿನಿಕ್ಗಳಿಗೆ ಬಾಗಿಲು ಹಾಕಿಸಿದರು. ಕೂಡಲೇ ನೊಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಅನುಮತಿ ಪಡೆದ ನಂತರವಷ್ಟೆ ಕಾರ್ಯಾರಂಭ ಮಾಡಬೇಕು ಎಂದು ಎಚ್ಚರಿಕೆ ನೀಡಿದರು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಎಚ್ಚರಿಕೆ ನೀಡಿದರು.