ಶೃಂಗೇರಿ: ಶೃಂಗೇರಿ ಶಾರದಾ ಮಠದಲ್ಲಿ ಮಂಗಳವಾರ ತುಂಗಾ ಪುಷ್ಕರ ಮಹೋತ್ಸವದ ಸಲುವಾಗಿ ಬೆಳಿಗ್ಗೆ 8 ಗಂಟೆಗೆ ತುಂಗಾನದಿಗೆ ಕಲ್ಪೋಕ್ತ ಪೂಜೆ ನಡೆಯಿತು. ಬಳಿಕ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು.
ಬಳಿಕ ಶಾರದಾಂಬಾ, ಶಂಕರ ಭಗವತ್ಪಾದರ ಹಾಗೂ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕವನ್ನು ನೆರವೇರಿಸಲಾಯಿತು.
ರಾತ್ರಿ ಮಠದ ಋತ್ವಿಜರು ತುಂಗಾ ದಡದಲ್ಲಿರುವ ತುಂಗೆ, ವರಾಹ ಮೂರ್ತಿ, ಶಾರದಾ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಉಮಾಮಹೇಶ್ವರ ಸ್ವಾಮಿಗೆ ತೆಪ್ಪೋತ್ಸವ ನಡೆಯುವ ಮೊದಲು ಮಠದ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿದರು.
ಮಠದ ಋತ್ವಜರು ತುಂಗಾರತಿ ಬೆಳಗಿದರು. ತಾಲ್ಲೂಕಿನ ಭಕ್ತರು, ಪ್ರವಾಸಿಗರು ಸಂಭ್ರಮದಿಂದ ತೆಪ್ಪೋತ್ಸದಲ್ಲಿ ಪಾಲ್ಗೊಂಡರು.