ಸೋಮವಾರ ಪಶುವೈದ್ಯಾಧಿಕಾರಿ ಡಾ.ವಿಜಯ ಕುಮಾರ್, ಆನೆಗೆ ಪ್ರಥಮ ಚಿಕಿತ್ಸೆ ನೀಡಿದಾಗ ಆನೆ ಚೇತರಿಸಿಕೊಂಡಿತ್ತು. ಸಂಜೆ ವೇಳೆಗೆ ಶಿವಮೊಗ್ಗದ ಪಶು ವೈದ್ಯಾಧಿಕಾರಿ ಡಾ.ವಿನಯ್ ಬಂದು ತಡರಾತ್ರಿವರೆಗೂ ಚಿಕಿತ್ಸೆ ಮುಂದುವರೆ ಸಿದ್ದರು. ಶಿವಮೊಗ್ಗದ ಸಕ್ರೆಬೈಲಿನಿಂದ ಮಾವುತರು ಬಂದು ಆನೆಯ ಚಿಕಿತ್ಸೆಗೆ ನೆರವಾದರು. ನಂತರ ಆನೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಬೆಳಿಗ್ಗೆ 7ಗಂಟೆ ವೇಳೆಗೆ ಆನೆ ಮರಿ ಮೃತಪಟ್ಟಿತು.