‘ತಾಯಿಯೊಂದಿಗೆ ತೋಟದಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಬುಧವಾರ ಸಂಜೆ ಇದ್ದಕ್ಕಿದ್ದಂತೆ ಬಿರುಗಾಳಿ–ಮಳೆ ಆರಂಭವಾಯಿತು. ಮನೆಯ ಮುಂದಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಅದರ ಕಿಡಿ ಮನೆಯ ಎದುರಿನ ಚಪ್ಪರಕ್ಕೆ ಬಿದ್ದು ಉರಿಯತೊಡಗಿತು. ತಕ್ಷಣ ಮನೆಯವರೆಲ್ಲ ಸೇರಿ ಬೆಂಕಿ ನಂದಿಸಿದೆವು. ಸಿಡಿಲಿನ ಹೊಡೆತಕ್ಕೆ ತೆಂಗಿನ ಮರದಲ್ಲಿನ ಕಾಯಿಯ ಗೊಂಚಲುಗಳು ಇಳಿ ಬಿದ್ದಿವೆ. ಸುಳಿ ಸುಟ್ಟು ಹೋಗಿದೆ’ ಎಂದು ಹೇಮಲತಾ ಅವರ ಪುತ್ರ ಜಯಪ್ರಕಾಶ್ ನಾರಾಯಣಗೌಡ ತಿಳಿಸಿದರು.