ನಾಯಕನಹಟ್ಟಿ ಹೋಬಳಿಯಲ್ಲಿ ಮಳೆ ಅಭಾವ, ಅಂತರ್ಜಲಮಟ್ಟ ಕುಸಿತ, ವಿದ್ಯುತ್ ಅಭಾವ ಸೇರಿ ಹಲವು ಸಮಸ್ಯೆಗಳ ನಡುವೆ ಕೊಳವೆಬಾವಿಯಲ್ಲಿ ದೊರೆಯುವ ಅತ್ಯಲ್ಪ ನೀರಿನಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂವು, ತರಕಾರಿ, ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ದಾಳಿಂಬೆ, ಪಪ್ಪಾಯ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಹೀಗಿರುವಾಗ ರೈತ ಮಹಿಳೆ ಬೋರಮ್ಮ ಅವರ ಫಲಕ್ಕೆ ಬಂದಿದ್ದ ತೆಂಗಿನ ಮರಕ್ಕೆ ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾಗಿದ್ದರಿಂದ ತೀವ್ರ ನಷ್ಟವಾಗಿದೆ ಎಂದು ರೈತ ಡಿ.ಎಚ್.ಪರಮೇಶ್ವರಪ್ಪ ತಿಳಿಸಿದರು.