ಕೆಳಗೋಟೆ ಗ್ರಾಮದ ಸರ್ವೆ ನಂಬರ್ 32/01ರಲ್ಲಿರುವ 2 ಎಕರೆ 8 ಗುಂಟೆ ಜಮೀನನ್ನು ಭೂಪರಿವರ್ತನೆ ಮಾಡದೇ ಬಡಾವಣೆ ರೂಪಿಸಲು ಪಂಪಾಪತಿ ಅವಕಾಶ ಮಾಡಿಕೊಟ್ಟಿದ್ದರು. ಸರ್ವೆಗೆ ತೆರಳಿದ ಗುತ್ತಿಗೆ ನೌಕರ ಗಂಗಾಧರಯ್ಯ ಕೂಡ ವಾಸ್ತವ ಮರೆಮಾಚಿದ್ದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಹಾಯಕ ಸರ್ಕಾರಿ ಅಭಿಯೋಜಕಿ ಎಂ.ರೂಪಾ ಸರ್ಕಾರದ ಪರ ವಾದ ಮಂಡಿಸಿದ್ದರು.