‘ಶರಣರ ಜೀವನ ಕ್ರಮ, ಕಾಯಕತತ್ವ, ದಾಸೋಹ, ಅಸಂಗ್ರಹತ್ವ, ಸಮಾನವಾದಗಳು ಸರ್ವಕಾಲಕ್ಕೂ ಆದರ್ಶ. ಈ ಕಾರಣಕ್ಕಾಗಿ ನಮ್ಮ ಆಲೋಚನೆಗಳು ಆಗಿಂದಾಗ್ಗೆ ಆ ಕಡೆಯೇ ಹರಿಯುತ್ತಿರುತ್ತದೆ. ಆ ಕಾಲಘಟ್ಟಕ್ಕಿಂತ ಮುಂಚೆ ಕಾಯಕದ ಬಗ್ಗೆ ಸಮಾನ ಗೌರವವಾಗಲಿ, ಆದಾಯವಾಗಲಿ ಇರಲಿಲ್ಲ. ಬಸವಾದಿ ಶರಣರು ಪರಂಪರಾನುಗತ ಸಂಪ್ರದಾಯ ಮೀರಿ ನೂತನ ಸಮಾಜ ಕಟ್ಟಲು ಶ್ರಮಿಸಿದರು’ ಎಂದು ಹೇಳಿದರು.